Sunday, January 30, 2011

'ವಿದ್ಯಾರ್ಥಿ' ನಿಲಯಗಳ ಬವಣೆ 
ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರಾದ ಡಾ.ವಿ.ಎಸ್. ಆಚಾರ್ಯ ರವರು ರಾಜ್ಯದಲ್ಲಿ ಇನ್ನೂ 45 ಹೊಸ ವಿದ್ಯಾರ್ಥಿ ನಿಲಯವನ್ನು ಸ್ಥಾಪನೆ ಮಾಡಲಾಗುವುದೆಂದು ಹೇಳಿಕೆ ನೀಡಿರುವುದು ತುಂಬಾ ಸಂತಸದ ಸಂಗತಿ. ಆದರೆ ಈಗ ಪ್ರಸ್ತುತ ಇರುವಂತಹ ವಿದ್ಯಾರ್ಥಿ ನಿಲಯಗಳ ಪರಿಸ್ಥಿತಿಯು ಬಹಳ ಶೋಚನೀಯವಾಗಿದೆ. 
ಹೆಚ್ಚಿನ ಸರ್ಕಾರಿ ವಿದ್ಯಾರ್ಥಿ ನಿಲಯಗಳು ತಮ್ಮ ಮೂಲಭೂತ ಸೌಕರ್ಯಗಳಿಂದ  ವಂಚಿತವಾಗಿವೆ. ಕಳಪೆ ಗುಣಮಟ್ಟದ ಬೇಳೆ-ಕಾಳುಗಳು, ಅಕ್ಕಿಯಲ್ಲಿ ಹುಳ-ಹುಪ್ಪಟೆ, ವಿದ್ಯಾರ್ಥಿ ಕೊಠಡಿಗಳಲ್ಲಿ ತಿಗಣೆ ಕಾಟ ಅದರೊಂದಿಗೆ ಅವ್ಯವಸ್ಥೆಯಿಂದ ಕೂಡಿದ ಶೌಚಾಲಯಗಳು, ಅಸಮರ್ಪಕ ನೀರಿನ ವ್ಯವಸ್ಥೆ ಮುಂತಾದ ಸಮಸ್ಯೆಗಳಿಂದ ನರಳುತ್ತಿದೆ. ಇಷ್ಟೆಲ್ಲಾ ತೊಂದರೆಗಳಿದ್ದರೂ ಅದಕ್ಕೆ ಸೂಕ್ತ ವ್ಯವಸ್ತೆ ಕಲ್ಪಿಸುವುದರ ಬದಲಾಗಿ ಹೊಸ ವಿದ್ಯಾರ್ಥಿ ನಿಲಯಗಳ ಸ್ಥಾಪನೆ ಎಷ್ಟು ಸರಿ?
ಇದರ ಬದಲಾಗಿ ನೆನೆಗುದಿಗೆ ಬಿದ್ದಿರುವ ಅನೇಕ ವಿದ್ಯಾರ್ಥಿ ನಿಲಯಗಳ ಗುಣಮಟ್ಟ ಹೆಚ್ಚಿಸುವತ್ತ ಗಮನ ಹರಿಸಿದರೆ ಒಳಿತಲ್ಲವೇ..
                                                                     ನವೀನ್ ಉಪ್ಪಿನಂಗಡಿ      

No comments:

Post a Comment