Saturday, January 15, 2011

ಇಂತವರು ತಂಡಕ್ಕೆ ಬೇಕೇ?
ದೂಸ್ರಾ: ಅಷ್ಟೋ ಇಷ್ಟೋ ಬ್ಯಾಟಿಂಗ್ ಗೊತ್ತಿದ್ದ ನಮ್ಮ ಸೀನು ಈಗಿನ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಸ್ಥಾನದ ಬದಲಿ ಆಟಗಾರ ಮುರಳಿ ವಿಜಯ್ ಬಗ್ಗೆ ವಿಪರೀತವಾಗಿ ತಲೆ ಕೆಡಿಸಿಕೊಂಡಿದ್ದ. ತಮಿಳುನಾಡಿನಲ್ಲಿ ಹುಟ್ಟಿರುತ್ತಿದ್ದರೆ ತಾನು ಕೂಡ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದೆನೋ ಏನೋ ಅಂತ ಚಿಂತಾಕ್ರಾಂತನಾಗಿದ್ದ.


ಸೆಹ್ವಾಗ್, ಗಂಭೀರ್, ತೆಂಡೂಲ್ಕರ್ ಬಳಿಕ ಭಾರತೀಯ ಕ್ರಿಕೆಟ್ ಪಡೆಯ ಆರಂಭಿಕ ಸ್ಥಾನಕ್ಕೆ ಸೂಕ್ತವಾದ ಆಟಗಾರ ಯಾಕೋ ಸಿಗುವ ಸೂಚನೆಯಿಲ್ಲ. ಈ ಮೂವರಲ್ಲಿ ಯಾರೊಬ್ಬ ಗಾಯಗೊಂಡರೂ ಅವರ ಸ್ಥಾನದಲ್ಲಿ ಈ ಮುರಳಿ ವಿಜಯ್ ಹಾಜರ್.
ಆಯ್ಕೆ ಸಮಿತಿಯ ಅಧ್ಯಕ್ಷರು ತಮಿಳುನಾಡಿನವರಾದ ಕಾರಣ ಮುರಳಿ ವಿಜಯ್ ಗೆ, ಟೆಸ್ಟ್, ಏಕದಿನ ಮತ್ತು ಟಿ20 ತಂಡದಲ್ಲಿ ಕನಿಷ್ಠ ಪಕ್ಷ ಬದಲಿ ಆಟಗಾರನ ಸ್ಥಾನವಾದರು ಸಿಗುತ್ತಿದೆ.
ಕೇವಲ ಐ.ಪಿ.ಎಲ್ ನಲ್ಲಿ ಈತ ತೋರಿದ ಪರಾಕ್ರಮವನ್ನು ಮುಂದಿಟ್ಟುಕೊಂಡು ತಂಡದಲ್ಲಿ ಸ್ಥಾನ ಕಲ್ಪಿಸಲಾಗುತ್ತಿದೆ. ಕೋಟಿಯ ಆಸೆಗೆ ಪಟ್ಟು ಬಿದ್ದು ಕೇವಲ   ಐ.ಪಿ.ಎಲ್ ನಲ್ಲಿ ಮಾತ್ರ ತನ್ನ ಪೌರುಷ ತೋರುವ ಮುರಳಿ ವಿಜಯ್, ರಾಷ್ಟ್ರೀಯ ತಂಡದಲ್ಲಿ ಆಡುವಾಗ ಮಾತ್ರ ಮಂಕು ಕವಿದಂತಾಗುತ್ತಾರೆ.
ದೇಶೀಯ ಕ್ರಿಕೆಟಿನಲ್ಲಿ  ಸಾಧನೆ ತೋರ್ಪಡಿಸಿರುವ ಹಲವಾರು ಪ್ರತಿಭಾನ್ವಿತ ಆಟಗಾರರ ದಂಡೇ ಇರುವಾಗ, ಶ್ರೀಕಾಂತ್ ರವರು ತಮ್ಮವರಿಗೆ ಆದ್ಯತೆ ನೀಡುತ್ತ ಪ್ರತಿಭಾನ್ವಿತ ಆಟಗಾರರನ್ನು ಕಡೆಗಣಿಸಿ, ಮುರಳಿ ವಿಜಯ್ ನಂತಹ ಆಟಗಾರನಿಗೆ ಮಣೆ ಹಾಕುವುದು ಎಷ್ಟು ಸರಿ?
                                                                             ರಕ್ಷಿತ್.ಎಸ್                        

1 comment:

  1. Heeey!! Well said doosra..Googlee news displayed d actual fact, Murali vijay flop once again 2day..

    ReplyDelete